ವಿಸ್ಯಾನ್ ಇನ್ಪ್ರಾಸ್ಟ್ರಕ್ಚರ್ ಪ್ರೈ ಲಿ ಲಾಂಛನದಲ್ಲಿ ಬಿ.ಎಸ್.ವಿಶ್ವ ಕಾರ್ಯಪ್ಪ ಅವರು ನಿರ್ಮಿಸುತ್ತಿರುವ ‘ಅಸ್ತಿತ್ವ’ ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ.
ನೂತನ್ ಉಮೇಶ್ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ರಾಕೇಶ್ ಬಿ ಅವರ ಛಾಯಾಗ್ರಹಣವಿದೆ. ವಿಜಯ್ ಅಂಟೊನಿ ಸಂಗೀತ ನಿರ್ದೇಶನ, ಶ್ರೀ ಕ್ರೇಜಿಮೈಂಡ್ಸ್ ಸಂಕಲನ, ಶಿವಕುಮಾರ್ ಜೆ ಕಲಾ ನಿರ್ದೇಶನ ಹಾಗೂ ಕುಂಗ್ಫ಼ೂ ಚಂದ್ರು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಯುವರಾಜ್, ಮಧುಸೂದನ್, ಪ್ರಜ್ವಲ್ ಪೂವಯ್ಯ, ದುನಿಯಾ ರಶ್ಮಿ, ಸೋನು ಗೌಡ, ಶೈನ್ ಶೆಟ್ಟಿ, ಕೆ.ಎಲ್.ಚಂದ್ರಶೇಖರ್(ಎಡಕಲ್ಲು ಗುಡ್ಡ), ಕೆ.ಪಿ.ಶ್ರೀಧರ್, ರಾಜೇಶ್ ನಟರಂಗ, ನಾಗರಾಜ್ ಮೂರ್ತಿ, ಶಶಿಧರ್ ಕೋಟೆ, ಶೈಲಜಾ ಜೋಶಿ, ಲಕ್ಷ್ಮೀ ಸಿದ್ದಯ್ಯ ಮುಂತಾದವರಿದ್ದಾರೆ.